ಮಲೆನಾಡಿನಲ್ಲಿ ವರುಣಾರ್ಭಟ: ಮೂವರು ಸಾವು, ಓರ್ವ ನಾಪತ್ತೆ

ಮಲೆನಾಡಿನಲ್ಲಿ ವರುಣಾರ್ಭಟ: ಮೂವರು ಸಾವು, ಓರ್ವ ನಾಪತ್ತೆ

ಶಿವಮೊಗ್ಗ, ಮಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಅಬ್ಬರ ಮುಂದುವರಿದಿದೆ. ತೀರ್ಥಹಳ್ಳಿ ತಾಲೂಕಿನ ಗಾಂಧಿನಗರದಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು (ಮಲ್ಲಿಕಾರ್ಜುನ, ನಾಗವೇಣಿ, ಸಂತೋಷ್) ಮೃತಪಟ್ಟಿದ್ದಾರೆ. ಮಂಗಳೂರಿನ ಬಂಟ್ವಾಳದಲ್ಲಿ ಜೀವನ್ ಪಿಂಟೊ ಅವರು ನೀರಿಗೆ ಬಿದ್ದು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶೃಂಗೇರಿ ಬಳಿ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Source: Zee Kannada News

Read the live feed on ZapIndies