ಹಾಸನದಲ್ಲಿ ಪತ್ನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಕಾಡು ಪ್ರಾಣಿಗಳಿಂದ ಶವ ಪತ್ತೆ

ಹಾಸನದಲ್ಲಿ ಪತ್ನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್; ಕಾಡು ಪ್ರಾಣಿಗಳಿಂದ ಶವ ಪತ್ತೆ

ಹಾಸನದ ಬೇಲೂರು ತಾಲೂಕಿನಲ್ಲಿ ಪತ್ನಿ ಗಗನಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ರಘು ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಆಗಿದೆ. ಕಾಡು ಪ್ರಾಣಿಗಳು ಕೆರೆದ ಪರಿಣಾಮ ಗಗನಳ ಶವ ಪತ್ತೆಯಾಗಿದೆ. ರಘು ತನ್ನ ಜಮೀನಿನಲ್ಲಿ ಗುಂಡಿ ತೆಗೆದು ಪತ್ನಿಯ ಶವವನ್ನು ಹೂತಿಟ್ಟು, ಪಕ್ಕದ ಮರಕ್ಕೆ ನೇಣು ಹಾಕಿಕೊಂಡಿದ್ದ. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ರಘು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

Source: Zee Kannada News

Read the live feed on ZapIndies