ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್ ಶನಿವಾರ ಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಬಂದರಿನಲ್ಲಿ ವ್ಯಾಪಾರ ಸ್ಥಗಿತಗೊಂಡಿರುವುದನ್ನು ಗಮನಿಸಿ ಸಿಡಿಮಿಡಿಗೊಂಡ ಅವರು, ವ್ಯಾಪಾರ ನಿಲ್ಲಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಅಧಿಕಾರಿಗಳೇ ಕಾರಣರಾದರೆ ಅಮಾನತು ಮಾಡುವುದಾಗಿ ಹೇಳಿದರು.
ಮಂಗಳೂರು ಬಂದರಿಗೆ ಸಿಎಂ ದಿಢೀರ್ ಭೇಟಿ: ವ್ಯಾಪಾರ ಸ್ಥಗಿತದ ವಿರುದ್ಧ ಕಠಿಣ ಎಚ್ಚರಿಕೆ
Source: Vishwavani