ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು ವಿಬಿಜಿ ರಾಮ್ ಜಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಒಂದು ವಾರದೊಳಗೆ ಜಾಬ್ ಕಾರ್ಡ್ ಮೇಳ ನಡೆಸಲು ಸೂಚಿಸಿದ್ದಾರೆ. 5,927 ಗ್ರಾಮ ಪಂಚಾಯತಿಗಳಲ್ಲಿ ಮೇಳ ಆಯೋಜಿಸಿ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬಗಳಿಗೆ ತತ್ ಕ್ಷಣ ಜಾಬ್ ಕಾರ್ಡ್ ನೀಡಬೇಕು. ಈಗಾಗಲೇ 2,900 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 1,000 ಕೋಟಿ ರೂ. ಕೂಲಿ ನೀಡಿಕೆಗೆ ಮೀಸಲಿಡಲಾಗಿದೆ.
ನರೇಗಾ ಫಲಾನುಭವಿಗಳಿಗೆ ಗುಡ್ ನ್ಯೂಸ್: ಒಂದು ವಾರದಲ್ಲಿ ಜಾಬ್ ಕಾರ್ಡ್ ಮೇಳ
Source: Zee Kannada News