ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೋಶ್ ನೀಡಿರುವ ಹೇಳಿಕೆಯಲ್ಲಿ ದರ್ಶನ್ ತಲೆಯಿಂದ ರಕ್ತ ಸುರಿಯುತ್ತಿದ್ದರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಜೂನ್ 8ರಂದು ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ನಲ್ಲಿ ಪವನ್ ದರ್ಶನ್ಗೆ ಮೊಬೈಲ್ನಲ್ಲಿ ಏನೋ ತೋರಿಸಿದ ಬಳಿಕ ದರ್ಶನ್ ಪವಿತ್ರಾ ಗೌಡ ಜೊತೆ ಕಾರಿನಲ್ಲಿ ಪಟಣ್ಣಗೆರೆ ಶೆಡ್ಗೆ ತೆರಳಿದ್ದರು. ಅಲ್ಲಿ ರೇಣುಕಾಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಒಳಉಡುಪು ಕಳಚಿ ಖಾಸಗಿ ಅಂಗಕ್ಕೆ ಒದ್ದಿದ್ದಾರೆ ಎಂದು ಪ್ರದೋಶ್ ಆರೋಪಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಬಹಿರಂಗ
Source: Zee Kannada News