ಬೆಂಗಳೂರಿಗೆ ತರಕಾರಿ ಪೂರೈಸುವ ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಶಿಡ್ಲಘಟ್ಟದಲ್ಲಿ ಅಂತರ್ಜಲ 90 ಮೀಟರ್ಗೆ ಕುಸಿದು ರಾಜ್ಯದಲ್ಲೇ ಅತಿ ಆಳ ತಲುಪಿದ್ದು, ಮಾಲೂರು ತಾಲ್ಲೂಕಿನಲ್ಲಿ 80 ಮೀಟರ್ಗೆ ಇಳಿದಿದೆ. ಮಳೆ ಕೊರತೆ ಮತ್ತು ಅನಿಯಂತ್ರಿತ ಬಳಕೆಯಿಂದಾಗಿ ರೈತರು ಮತ್ತು ಕುರಿ ಸಾಕಣೆದಾರರು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದಾರೆ.
ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಂತರ್ಜಲ ತೀವ್ರ ಕುಸಿತ
Source: Prajavani