ಜಾರ್ಖಂಡ್ನಲ್ಲಿ ನೇಮಕಾತಿ ಪರೀಕ್ಷೆ ಅಕ್ರಮ ಆರೋಪಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಆಕಾಂಕ್ಷಿಗಳು ಸಿಎಂ ಹೇಮಂತ್ ಸೊರೆನ್, ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರ ಪ್ರತಿಕೃತಿ ದಹಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಆ.20ರಂದು ಸೊರೆನ್ ನಿವಾಸಕ್ಕೆ ಘೇರಾವ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಪರೀಕ್ಷೆ ರದ್ದು, ಸಿಬಿಐ ತನಿಖೆ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಜಾರ್ಖಂಡ್ ಪರೀಕ್ಷೆ ಅಕ್ರಮ: ಸೊರೆನ್, ರಾಹುಲ್ ಪ್ರತಿಕೃತಿ ದಹನ, ಆ.20ಕ್ಕೆ ಘೇರಾವ್
Source: Kannada Prabha