ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ರಾಜ್ಯದ 21 ಕಡೆ ದಾಳಿ ನಡೆಸಿದೆ. ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿ ರೆಸಾರ್ಟ್ನಲ್ಲಿ ತರಬೇತಿ ನೀಡುತ್ತಿದ್ದುದು ತನಿಖೆಯಿಂದ ಬಯಲಾಗಿದೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆಯಲ್ಲಿ 38 ಗಂಟೆಗಳಿಂದ ಶೋಧ ಮುಂದುವರಿದಿದ್ದು, ಬೇನಾಮಿ ಆಸ್ತಿ ಪತ್ರಗಳು ಪತ್ತೆಯಾಗಿವೆ.
KPSC ಹಗರಣ: ಇಡಿ ದಾಳಿ, ಪ್ರಶ್ನೆಪತ್ರಿಕೆ ಸೋರಿಕೆ ಬಯಲು
Source: Zee Kannada News