ಮಂಗಳೂರು ವಿಶ್ವವಿದ್ಯಾಲಯದ ಕ್ರೈಸ್ತತ್ವ ಅಧ್ಯಯನ ಪೀಠ ಮತ್ತು ಸೇಂಟ್ ಜೋಸೆಫ್ ಇಂಟರ್-ಡಯೋಸಿಸನ್ ಸೆಮಿನರಿ, ಜೆಪ್ಪು ಇವರ ಸಹಯೋಗದಲ್ಲಿ 'ಭಾರತದಲ್ಲಿ ಕ್ರೈಸ್ತ ಚಿಂತನೆ: ಸಂದರ್ಭ, ಸಂಸ್ಕೃತಿ ಮತ್ತು ಸಾಮಾಜಿಕ ಪರಿವರ್ತನೆ' ರಾಷ್ಟ್ರೀಯ ಸಿಂಪೋಸಿಯಂ ನಡೆಯಿತು. ಬಿಷಪ್ ಪೀಟರ್ ಪಾಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಲೇರಿಯನ್ ರೊಡ್ರಿಗಸ್, ಡಾ. ಪ್ರೀತಿ ಡಿಸೋಜಾ ಮುಂತಾದವರು ಭಾಗವಹಿಸಿದ್ದರು. ಸಮಾಜ ಸುಧಾರಣೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಕ್ರೈಸ್ತ ಧರ್ಮದ ಕೊಡುಗೆ ಕುರಿತು ಚರ್ಚಿಸಲಾಯಿತು.
ಜೆಪ್ಪು ಧರ್ಮಶಾಸ್ತ್ರ ಮಹಾವಿದ್ಯಾಲಯದಲ್ಲಿ ಕ್ರೈಸ್ತ ಚಿಂತನೆ ರಾಷ್ಟ್ರೀಯ ಸಿಂಪೋಸಿಯಂ
Source: Mangalorean