ಮಂಡ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಭುಗಿಲೆದ್ದಿದೆ. ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಪ್ರಶ್ನಿಸಿ ರೈತರು ಮತ್ತು ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಡ್ಯಾಂನಲ್ಲಿ ಕೇವಲ 109 ಅಡಿ ನೀರಿರುವಾಗ ರೈತರಿಗೆ ಕಟ್ಟುಪದ್ಧತಿ ನೀರು ಮಾತ್ರ ನೀಡುತ್ತಿರುವುದನ್ನು ಖಂಡಿಸಿ, ಬೊಗಸೆ ನೀರು ಚಳವಳಿ ನಡೆಸಿದ್ದಾರೆ. ಆಗಸ್ಟ್ 26ಕ್ಕೆ ಕೆಆರ್ಎಸ್ಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಲಾಗಿದೆ.
ಮಂಡ್ಯದಲ್ಲಿ ಕಾವೇರಿ ನೀರು ವಿವಾದ: ರೈತರ ಆಕ್ರೋಶ
Source: Zee Kannada News